ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಘಟನೆ ನಡೆದಿದ್ದು ನೆಲಮಂಗಲದ ಕುದುರೆಗೆರೆ ಕಾಲೋನಿಯ ನಿವಾಸಿಗಳಾದ ಒಂದೇ ಕುಟುಂಬದ ಏಳು ಮಂದಿ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದರು. ದಾರಿ ಮಧ್ಯೆ ರಸ್ತೆ ಪಕ್ಕ ಇದ್ದ ಹೊಟೆಲ್ ಒಂದರಲ್ಲಿ ಊಟ ಮುಗಿಸಿ ಹೊರಗೆ ನಿಂತಿದ್ದಾಗ ಮೂವರ ಮೇಲೆ ಹರಿದು ಹೋಗಿದೆ. ಪರಿಣಾಮ ರೇಣುಕಪ್ಪ, ಗಂಗಮ್ಮ ಹಾಗೂ ಸರೋಜಮ್ಮ ಎಂಬುವರು ದುರ್ಮರಣವನ್ನಪ್ಪಿದ್ದಾರೆ.ಅಪಘಾತ ಮಾಡಿದ ಕಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.