ಏನಿದು ಪ್ರಕರಣ?:
ಪದ್ಮನಾಭನಗರದ ಏಳನೇ ಕ್ರಾಸ್ನಲ್ಲಿರುವ 12 ಸಾವಿರ ಚದರ ಅಡಿಯ ನಿವೇಶನ ಇದಾಗಿದ್ದು, ಇದನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಿರಿಸಲಾಗಿತ್ತು. ಆದರೆ ವೆಂಕಟೇಶ್ ಮೂರ್ತಿ ಅವರು ಮೇಯರ್ ಆಗಿದ್ದ ವೇಳೆಯಲ್ಲಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಆ ಸೈಟನ್ನು ಕಬಳಿಸಿದ್ದಾರೆ ಎಂದು ಮೂರ್ತಿ ವಿರುದ್ಧ ಮುನಿಕೃಷ್ಣ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.