ರಾಜ್ಯ ಹೆದ್ದಾರಿ 19ರಲ್ಲಿ ಇಂದು ಮುಂಜಾನೆ 6.30 ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು ಲಾರಿಯೊಂದು ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತಿನಗಾಡಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೆ ಮೂವರು ಗಾಯಗೊಂಡಿದ್ದಾರೆ. ಒಂದು ಎತ್ತು ಸಹ ಸಾವನ್ನಪ್ಪಿದ್ದು ಮತ್ತೊಂದಕ್ಕೆ ಗಾಯವಾಗಿದೆ. ಮೃತರೆಲ್ಲರೂ ಸಿಂದಗೇರಿ ಗ್ರಾಮದವರಾಗಿದ್ದಾರೆ.