ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತು ರಂಗಾದೊರೈ ಆಸ್ಪತ್ರೆಯ ವೈದ್ಯ ಡಾ. ರಾಜಕುಮಾರ್ ಹೇಳಿಕೆ ನೀಡುತ್ತಾ, ರಾಜೇಂದ್ರ ಪ್ರಸಾದ್ ಅವರ ಗಾಯಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದೇವೆ. ಆದರೆ ರೋಗಿ ಕಡೆಯವರು 20 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಡಿಸ್ಚಾರ್ಜ್ ಆಗಲೂ ಒಪ್ಪುತ್ತಿಲ್ಲ. ರೋಗಿ ಕಡೆಯವರು ಪ್ರಾಣ ಕಳೆದುಕೊಳ್ಳುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.