ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸುಬ್ರಹ್ಮಣ್ಯ, ಮುಂಬೈ ಐಐಟಿ ನಿರ್ದೇಶಕ ಪ್ರೊ.ದೇವಾಂಗ್, ಗಾಂಧಿನಗರ ಐಐಟಿ ನಿರ್ದೇಶಕ ಪ್ರೊ.ಸುಧೀರ್ ಎಲ್.ಜೈನ್, ಬೆಂಗಳೂರು ಸೆಂಟ್ರಲ್ ಪಬ್ಲಿಕ್ ವರ್ಕ್ ಇಂಜಿನಿಯರ್ ರವಿಕಾಂತ್ ಐಐಟಿ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಲು ನಗರಕ್ಕೆ ಆಗಮಿಸಿದ್ದಾರೆ
ಜಿಲ್ಲೆಯ ತಾಂಡವಪುರ, ಹಿಮ್ಮಮಾವು, ಹುಳಿಮಾವು ಗ್ರಾಮಗಳಲ್ಲಿ ಸುಮಾರು 500 ಎಕರೆ ಜಾಗವನ್ನು ಐಐಟಿ ಸ್ಥಾಪನೆಗೆ ಗುರುತಿಸಲಾಗಿದೆ. ಅಧಿಕಾರಿಗಳು ಈ ಜಾಗಗಳನ್ನು ಪರಿಶೀಲಿಸಿ ತಮಗೆ ಸೂಕ್ತವಾದ ಜಾಗವನ್ನು ಗುರುತಿಸಿ ವರದಿ ನೀಡಲಿದ್ದಾರೆ ಎನ್ನಲಾಗಿದೆ.