ಆರೋಪಿ ದಾವಣಗೆರೆ ಜಿಲ್ಲೆಯ ಗೊಲ್ಲರಹಟ್ಟಿ ನಿವಾಸಿ ಶಿವಕುಮಾರ್ ನಾಯ್ಕ ಎಂದು ತಿಳಿದು ಬಂದಿದ್ದು, ಆಗಾಗ ತನ್ನ ಮಡದಿ ಸುಮಾಗೆ ತವರು ಮನೆಯಿಂದ ಹಣ ತರುವಂತೆ ಹಿಂಸೆ ನೀಡುತ್ತಿದ್ದ. ಕಳೆದ ರಾತ್ರಿ ಸಹ ತನ್ನ ಮಡದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಆತ ಬಲವಂತವಾಗಿ ಬಾಯಿಗೆ ವಿಷ ಸುರಿದ್ದಿದ್ದಾನೆ. ಬಳಿಕ ತನ್ನ ಮಡದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಪರಾರಿಯಾಗಿದ್ದಾನೆ.