ಹೆಣ್ಣು ಮಗಳು ಹುಟ್ಟಿದಳು ಎಂಬ ಕಾರಣಕ್ಕೆ ಪತಿಯೋರ್ವ ಪತ್ನಿಗೆ ವಿಷ ಉಕ್ಕಿ ಸಾಯಿಸಲು ಪ್ರಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ. ಅನಗೋಳಧ ನಿವಾಸಿ ಅಂಜುಂ ಎಂಬಾಕೆಯನ್ನು ಮದುವೆಯಾಗಿದ್ದ ಧಾರವಾಡ ಜಿಲ್ಲೆಯ ಅಳ್ನಾವರದ ನಿವಾಸಿ ಸಯ್ಯದ್ ಅಹ್ಮದ್ ಖಾಜಿ ಎಂಬಾತನೇ ಈ ದುಷ್ಕೃತ್ಯವನ್ನೆಸಲು ಪ್ರಯತ್ನಿಸಿದ ಆರೋಪಿಯಾಗಿದ್ದಾನೆ.
ಅವರಿಬ್ಬರ ಮದುವೆಯಾಗಿ ಒಂದು ವರ್ಷವಾಗಿದ್ದು ಪತ್ನಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಖಾಜಿ ಇತ್ತೀಚಿಗೆ ಹೆಣ್ಣು ಮಗು ಜನಿಸಿದ್ದರಿಂದ ಆಕೆಗೆ ಅತಿಯಾಗಿ ಕಿರುಕುಳ ಕೊಡುತ್ತಿದ್ದ ಎಂದು ತಿಳಿದು ಬಂದಿದೆ.
ಅಷ್ಟಕ್ಕೆ ಸುಮ್ಮನಾಗದ ಆತ ಆಕೆಯನ್ನು ಕೊಂದು ಬಿಡುವಂತ ಕೀಳು ಮಟ್ಟಕ್ಕೆ ಇಳಿದು ಊಟದಲ್ಲಿ ವಿಷ ಬೆರಸಿ ತಿನ್ನಿಸಿದ್ದಾನೆ. ಅಸ್ವಸ್ಥಗೊಂಡಿದ್ದ ಅಂಜುಂಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಪಿಯ ವಿರುದ್ಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.