ನಾನು ವ್ಯಕ್ತಿಯಲ್ಲ, ಶಕ್ತಿ, ರಕ್ತಬೀಜದೇವ: ನಿತ್ಯಾನಂದ ಬಡಬಡಿಕೆ

ಗುರುವಾರ, 18 ಸೆಪ್ಟಂಬರ್ 2014 (18:45 IST)
ಇತ್ತೀಚೆಗೆ ಅತ್ಯಾಚಾರದ ಆರೋಪಕ್ಕೊಳಗಾಗಿ ಪುರುಷತ್ವ ಪರೀಕ್ಷೆಗೆ ಒಳಪಟ್ಟ ನಿತ್ಯಾನಂದನ ಪ್ರಲಾಪ ಮತ್ತೆ ಮುಂದುವರಿದಿದ್ದು, "ನಾನೊಬ್ಬ ವ್ಯಕ್ತಿಯಲ್ಲ ಶಕ್ತಿ, ನಾನು ರಕ್ತಬೀಜಾಸುರನಲ್ಲ, ರಕ್ತಬೀಜದೇವ" ಎಂದು ಸ್ವಾಮಿ ನಿತ್ಯಾನಂದ ಸತ್ಸಂಗ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾನೆ.

 ನನ್ನ ಒಂದೊಂದು ರಕ್ತಕಣದಿಂದ ಮತ್ತೊಬ್ಬ ನಿತ್ಯಾನಂದ ಹುಟ್ಟುತ್ತಾನೆ ಎಂದು ಬಡಬಡಿಸಿದ್ದಾನೆ. ಹಿಂದುಗಳ ಎಲ್ಲಾ ಶಕ್ತಿಗಳನ್ನು ನಾಶ ಮಾಡುವ ಕಾರ್ಯ ನಡೀತಿದೆ. ಹತ್ತುಸಾವಿರ ವರ್ಷಗಳಿಂದಲೂ ಹಿಂದೂ ಧರ್ಮದ ಮೇಲೆ ಧಾರ್ಮಿಕವಾಗಿ ದಾಳಿ ನಡೀತಿದೆ.

ದೇವಾಲಯಗಳು, ಹಿಂದೂ ಧಾರ್ಮಿಕ ಸಂಘಟನೆಗಳ ಮೇಲೆ ನಿರಂತರ ದಾಳಿ ನಡೀತಿದೆ.  ಬೌದ್ಧಿಕವಾಗಿ, ಮಾಧ್ಯಮಿಕವಾಗಿ ಹಿಂದೂಗಳನ್ನು ನಿಶ್ಯಸ್ತ್ರೀಕರಣಗೊಳಿಸುವ ಕೆಲಸ ನಡೆಯುತ್ತಿದೆ. ನಾನು ಹಿಂದೂ ಧರ್ಮದ ಪುನರುತ್ಥಾನ ಮಾಡ್ತಿದ್ದೇನೆ ಎಂದು  ನಿತ್ಯಾನಂದ ಹೇಳಿದ್ದಾನೆ. ನಾನು ಹಿಂದೂ ಧರ್ಮದ ಉದ್ಧಾರಕ. ನನ್ನ ಬಳಿ ಕೋಟ್ಯಂತರ ಸನ್ಯಾಸಿಗಳಿದ್ದಾರೆ ಎಂದು ಪುನರುಚ್ಚರಿಸಿದ್ದಾನೆ. 

ವೆಬ್ದುನಿಯಾವನ್ನು ಓದಿ