ತಾವು ಮಂಗಳೂರಿನವನಾಗಿದ್ದು ಹೆಮ್ಮೆಯೆನಿಸುತ್ತದೆ ಎಂದು ಭಾರತದ ಮಾಜಿ ಕ್ರಿಕೆಟರ್ ಮತ್ತು ಟೀಂ ಇಂಡಿಯಾದ ಉಸ್ತುವಾರಿ ನಿರ್ದೇಶಕ ರವಿ ಶಾಸ್ತ್ರಿ ಹೇಳಿದ್ದಾರೆ. ಧಾರ್ಮಿಕ ನಂಬಿಕೆಯ ಕಾರಣದಿಂದ ತವರು ಪಟ್ಟಣದ ಜತೆ ಸಂಬಂಧ ಸುಧಾರಿಸಿದ್ದು, ಕಳೆದ ಏಳು ವರ್ಷಗಳಿಂದ ಮಂಗಳೂರಿಗೆ ಭೇಟಿ ನೀಡುತ್ತಿದ್ದೇನೆ ಎಂದು ರವಿ ಶಾಸ್ತ್ರಿ ಮಂಗಳೂರಿನ ಜತೆ ತಮ್ಮ ಬಾಂಧವ್ಯವನ್ನು ಬಿಚ್ಟಿಟ್ಟರು.
ವಿವಾಹವಾಗಿ 18ವರ್ಷಗಳವರೆಗೆ ಶಾಸ್ತ್ರಿಗೆ ಮಕ್ಕಳಾಗಿರಲಿಲ್ಲ. ಈ ಕುರಿತು ಜ್ಯೋತಿಷಿಯೊಬ್ಬರನ್ನು ಕೇಳಲು ಹೋದಾಗ ಅವರ ಕುಟುಂಬದ ದೇವರನ್ನು ಮರೆತಿದ್ದರಿಂದ ಹೀಗಾಗಿದೆ ಎಂದಿದ್ದರು. ಇದಾದ ಬಳಿಕ ರವಿ ಶಾಸ್ತ್ರಿ ಕಾರ್ಕಳ ಕರವಾಲು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಪ್ರತಿ ವರ್ಷ ದರ್ಶನ ನೀಡುತ್ತಿದ್ದು, ಈ ಭೇಟಿಯ ಫಲವಾಗಿ ಅವರಿಗೆ ಹೆಣ್ಣು ಮಗುವಾಗಿತ್ತು.