ಖಾತೆ ಬದಲಾವಣೆಗೆ ನಾನು ಸಿದ್ಧ: ಕೃಷ್ಣಭೈರೇಗೌಡ

ಶನಿವಾರ, 31 ಜನವರಿ 2015 (13:56 IST)
ನನ್ನ ಖಾತೆ ಬದಲಾವಣೆಗೆ ನಾನು ಸಿದ್ಧನಿದ್ದು, ಖಾತೆ ಬದವಾವಣೆ ವಿಚಾರ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಅವರಿಗೆ ಬಿಟ್ಟಿದ್ದು ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. 
 
ಜಿಲ್ಲೆಯ ಹಾನಗಲ್‌ ನಗರದಲ್ಲಿ ಮಾತನಾಡಿದ ಸಚಿವರು, ನಾನು ನನ್ನ ಖಾತೆ ಬದಲಾವಣೆಗೆ ಸಿದ್ಧನಿದ್ದು, ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಅವರ ನಿರ್ಧಾರವೇ ಅಂತಿಮವಾಗಿದ್ದು, ಅವರೇ ನಿಸ್ಸೀಮರು. ಹಾಗಾಗಿ ಖಾತೆ ಬದಲಾವಣೆ ವಿಷಯದಲ್ಲಿ ನನ್ನ ಯಾವುದೇ ಅಭ್ಯಂತರವಿಲ್ಲ. ನನ್ನ ಖಾತೆಯನ್ನು ನಾನು ಬದಲಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ತಿಳಿಸಿದರು. 
 
ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರು ತಮಗೆ ಸಂಪುಟದಲ್ಲಿ ಸೂಕ್ತ ಸ್ಥಾನ ಮಾನ ನೀಡಿಲ್ಲ ಎಂಬ ಅಸಮಧಾನದಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕೃಷಿ ಸಚಿವರು ಹೀಗೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದ್ದು, ಅಬಕಾರಿ ಖಾತೆಯನ್ನು ನೀಡಿದರೂ ಕೂಡ ನಾನು ನಿಭಾಯಿಸಬಲ್ಲೆ ಎಂದು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.  

ವೆಬ್ದುನಿಯಾವನ್ನು ಓದಿ