ಎರಡು ಬಾರಿ ಸಿಎಂ ಆಗುವ ಅವಕಾಶ ಒದಗಿಬಂದಿತ್ತು: ರಾಜಶೇಖರನ್

ಮಂಗಳವಾರ, 21 ಏಪ್ರಿಲ್ 2015 (12:36 IST)
ನನಗೆ ಎರಡು ಬಾರಿ ಸಿಎಂ ಆಗುವ ಅವಕಾಶ ಒದಗಿಬಂದಿತ್ತು ಎಂದು ಬಸವಜಯಂತಿ ಕಾರ್ಯಕ್ರಮಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಂ.ವಿ. ರಾಜಶೇಖರನ್ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೇವೇಗೌಡರು ನನ್ನ ಹೆಸರು ಸೂಚಿಸಿದ್ದರು.

ಆದರೆ ನಾನೇ ಅವಕಾಶ ನಿರಾಕರಿಸಿದ್ದರಿಂದ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಯಿತು.  ಮಲ್ಲಿಕಾರ್ಜುನ ಖರ್ಗೆ ಕೂಡ ಅವರ ಹಿಂದೆಯೇ ಸಿಎಂ ಆಗಬಹುದಿತ್ತು.

 ಆದರೆ ಕೆಲವು ಶಕ್ತಿಗಳು ಖರ್ಗೆ ಅವರಿಗೆ ಅವಕಾಶ ತಪ್ಪಿಸಿದವು ಎಂದು ರಾಜಶೇಖರನ್ ಹೇಳಿದರು. ಕೆಲವು ಕೈಗಳು ಪರಮೇಶ್ವರ್ ಸೋಲುವಂತೆ ಮಾಡಿದವು ಎಂದು ರಾಜಶೇಖರನ್ ಹೇಳಿದರು.  ಪರಮೇಶ್ವರ್ ಅವರು ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ನಿಗೂಢ ಕೈಗಳಿಂದ ಪರಮೇಶ್ವರ್ ಸೋತಿದ್ದಾರೆಂದು ರಾಜಶೇಎಖರನ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ