8 ವಿಧಾನಪರಿಷತ್ ಸದಸ್ಯರಿಗೆ ವಿವರಣೆ ಕೇಳಿದ್ದೇನೆ, ನೋಟಿಸ್ ನೀಡಿಲ್ಲ: ಶಂಕರ್‌ಮೂರ್ತಿ

ಶನಿವಾರ, 3 ಜೂನ್ 2017 (14:12 IST)
ವಿಧಾನಪರಿಷತ್‌ನ ಎಂಟು ಮಂದಿ ಸದಸ್ಯರಿಗೆ ವಿವರಣೆ ಕೇಳಿದ್ದೇನೆಯೇ ಹೊರತು ನೋಟಿಸ್ ನೀಡಿಲ್ಲ ಎಂದು ಸಭಾಪತಿ ಡಿ.ಎಚ್.ಶಂಕರ್‌ಮೂರ್ತಿ ಹೇಳಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಂಟು ಮಂದಿ ವಿಧಾನಪರಿಷತ್ ಸದಸ್ಯರು ಕಾನೂನುಬಾಹಿರವಾಗಿ ಟಿಎ, ಡಿಎ ಪಡೆದಿದ್ದರಿಂದ ಅವರ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಮೇ 24 ರಂದು ಪದ್ಮನಾಭ ರೆಡ್ಡಿಯವರು ನನಗೆ ದೂರು ನೀಡಿದ್ದರು ಎಂದು ತಿಳಿಸಿದ್ದಾರೆ.
 
ಪದ್ಮನಾಭ ರೆಡ್ಡಿಯವರ ದೂರಿನ ಬಗ್ಗೆ ವಿವರಣೆ ಕೊಡುವಂತೆ ಎಂಟು ಮಂದಿ ವಿಧಾನಪರಿಷತ್ ಸದಸ್ಯರಿಗೆ ವಿವರಣೆ, ಅಭಿಪ್ರಾಯ ಕೇಳಿದ್ದೇನೆಯೇ ಹೊರತು ನೋಟಿಸ್ ನೀಡಿಲ್ಲ ಎಂದರು.
 
ಒಂದು ವೇಳೆ ಆರೋಪ ಸಾಬೀತಾದಲ್ಲಿ ಎಂಟು ಮಂದಿ ವಿಧಾನಪರಿಷತ್ ಸದಸ್ಯರು ಸದಸ್ಯ ಸ್ಥಾನದಿಂದ ಅನರ್ಹರಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ