ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬೆಳವಣಿಗೆಗಳು ನನ್ನ ಗಮಕ್ಕೆ ಬಂದಿಲ್ಲ : ಜಿ.ಪರಮೇಶ್ವರ್

ಶನಿವಾರ, 29 ಆಗಸ್ಟ್ 2015 (17:15 IST)
ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕಸರತ್ತು ನಡೆಸಿರುವ ಯಾವುದೇ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಬಂದಲ್ಲಿ ಚರ್ಚಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
 
ಬೆಂಗಳೂರಿನ ಜನತೆ ನಮಗೆ 76 ಸ್ಥಾನಗಳಲ್ಲಿ ಗೆಲ್ಲಿಸಿದ್ದರಿಂದ ನಮ್ಮ ಸ್ಥಾನ ಏನು ಎನ್ನುವ ಅರಿವಿದೆ. ಯಾವುದೇ ಮೈತ್ರಿಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಆದೇಶದಂತೆ ನಾವು ನಡೆಯುತ್ತೇವೆ ಎಂದು ತಿಳಿಸಿದ್ದಾರೆ.
 
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತೇವೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಅವರು, ನನ್ನ ಗಮನಕ್ಕೆ ಯಾವುದೇ ಬೆಳವಣಿಗೆಗಳು ಬಂದಿಲ್ಲ.ಕಾದು ನೋಡೋಣ ಎಂದರು.
 
ಬಿಬಿಎಂಪಿ ಮೈತ್ರಿ ಕುರಿತಂತೆ ಹಲವಾರು ಉಹಾಪೋಹ ವರದಿಗಳ ಮಧ್ಯೆ ಯಾವುದೇ ಪಕ್ಷದೊಂದಿಗೆ ಮೈತ್ರಿಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಬಿಜೆಪಿ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. 
 

ವೆಬ್ದುನಿಯಾವನ್ನು ಓದಿ