ಛೆ...ಛೆ...ಬಹಿರಂಗವಾಗಿ ಚುಂಬಿಸುವುದು ನಮ್ಮ ಸಂಸ್ಕ್ರತಿಯಲ್ಲ ಕಣ್ರೀ : ಕುಮಾರಸ್ವಾಮಿ

ಗುರುವಾರ, 20 ನವೆಂಬರ್ 2014 (16:30 IST)
ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಚುಂಬಿಸುವುದು ನಮ್ಮ ಸಂಸ್ಕ್ರತಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಸ್ ಮೇಳವನ್ನು ವಿರೋಧಿಸಿದ್ದಾರೆ.
 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹಿಳಾ ಕೈದಿಗಳ ಮೇಲೆ ನಿರಂತರವಾಗಿ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ನಾನು ಹೇಳಿಲ್ಲ. ಇಂತಹ ವರದಿಗಳು ಕೇಳಿ ಬರುತ್ತಿರುವುದರಿಂದ ಕೂಡಲೇ ಕಠಿಣ ಕ್ರಮ ಕೈಗೊಳ್ಳಿ ಎಂದು ಸರಕಾರವನ್ನು ಒತ್ತಾಯಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
 
ಇಬ್ಬರು ಸಚಿವರ ದಾಖಲೆಗಳನ್ನು ಬಿಡುಗಡೆ ಮಾಡಿದ್ರೆ ಸಚಿವರಾಗಿ ಉಳಿಯೋಲ್ಲ. ಆದರೆ, ಜಾತಿ ವಿರೋಧವನ್ನು ಎದುರಿಸಬೇಕಾಗುತ್ತದೆ. ಹಿಂದೆ ಬಿಜೆಪಿ ಸರಕಾರವಿದ್ದಾಗ ಹಲವಾರು ಬಿಜೆಪಿ ನಾಯಕರ ವಿರುದ್ಧದ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿ ವೀರಶೈವ ಸಮಾಜದಿಂದ ಭಾರಿ ವಿರೋಧ ಎದುರಾಗಿತ್ತು ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ