ನಾನೂ ರಾಜಕೀಯಕ್ಕೆ ಬರುವೆ: ಮನದಾಳ ಬಿಚ್ಚಿಟ್ಟ ಅರಸ ಯದುವೀರ್

ಗುರುವಾರ, 3 ಸೆಪ್ಟಂಬರ್ 2015 (13:30 IST)
ಮೈಸೂರಿನ ಒಡೆಯರ್ ರಾಜ ವಂಶದ ಪ್ರಸ್ತುತದ ಅರಸ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ರಾಜಕೀಯಕ್ಕೆ ಬರುವ ಚಿತ್ತವಿದ್ದು, ಈ ಬಗ್ಗೆ ಮುಂದೆ ಹೆಚ್ಚಿನ ಮಾಹಿತಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.  
 
ರಾಜ ವಂಶದ ಸಾಂಸ್ಕೃತಿಕ ಕಾರ್ಯಕ್ರಮ ದಸರಾ ಆಯೋಜನೆ ಸಂಬಂಧ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬಕ್ಕೆ ಆಗಾಗಲೇ ಎಲ್ಲಾ ತಯಾರಿಯ ಸಿದ್ಧತೆಗೆ ಯೋಜನೆ ರೂಪಿಸುತ್ತಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಕೂಡ ಸಡಗರದಿಂದ ನಡೆಸಿಕೊಡಲಿದ್ದೇನೆ. ಅಲ್ಲದೆ ರಾಜ ವಂಶದ ಕಾರ್ಯಕ್ರಮ ಮತ್ತು ಆಡಳಿತದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ಮುಂದೆಯೂ ಕೂಡ ಕಲಿಯುತ್ತೇನೆ ಎಂದರು.
 
ಇದೇ ವೇಳೆ, ರಾಜಕೀಯಕ್ಕೆ ಬರುವ ಇಂಗಿತ ಏನಾದರೂ ಇದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತಿರಿಸಿದ ಅವರು ರಾಜಕೀಯಕ್ಕೆ ಬರುವ ಮನಸ್ಸಿದ್ದು ಆ ಬಗ್ಗೆ ಮುಂದೆ ಹೆಚ್ಚಿನ ಮಾಹಿತಿ ನೀಡಲಿದ್ದೇನೆ ಎಂಬ ಇಂಗಿತ ಹರಿಬಿಟ್ಟರು. 

ವೆಬ್ದುನಿಯಾವನ್ನು ಓದಿ