ಸರಕಾರದ ಕೆಲಸಕ್ಕೂ ಸಿದ್ದ, ಪಕ್ಷದ ಕೆಲಸಕ್ಕೂ ಬದ್ಧ : ಸಚಿವ ಅಂಜನೇಯ

ಭಾನುವಾರ, 26 ಫೆಬ್ರವರಿ 2017 (17:02 IST)
ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ. ಸಚಿವರನ್ನು ತೆಗೆಯುವುದು ಬಿಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ ಎಂದು ಸಚಿವ ಎಚ್.ಅಂಜನೇಯ ಹೇಳಿದ್ದಾರೆ.
 
ನಾನು ಸರಕಾರದ ಕೆಲಸಕ್ಕೂ ಸಿದ್ದ ಪಕ್ಷದ ಕೆಲಸಕ್ಕೂ ಬದ್ಧ. ಪಕ್ಷದ ಹೈಕಮಾಂಡ್ ಯಾವ ಕೆಲಸ ಕೊಟ್ಟರು ಸಂತೋಷದಿಂದ ನಿರ್ವಹಿಸುತ್ತೇನೆ ಎಂದು ಕೆಪಿಸಿಸಿ ಸಮನ್ವಯ ಸಮಿತಿಯಲ್ಲಿ ತಿಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಗುರಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಆಗಲಿ, ಸಿಎಂ ಸಿದ್ದರಾಮಯ್ಯರಾಗಲಿ ಯಾವುದೇ ಹೊಣೆ ಹೊರಿಸಿದರು ನಿಭಾಯಿಸಲು ಸಿದ್ದನಾಗಿದ್ದೇನೆ ಎಂದರು.
 
ಬಿಜೆಪಿಗೆ ಸರಕಾರದ ವಿರುದ್ಧ ಯಾವುದೇ ಗುರುತರ ಆರೋಪಗಳಿಲ್ಲವಾದ್ದರಿಂದ ಡೈರಿಯ ನಾಟಕವಾಡುತ್ತಿದೆ. ಡೈರಿಯ ಸತ್ಯಾಸತ್ಯತೆ ಯಡಿಯೂರಪ್ಪ-ಅನಂತ್ ಕುಮಾರ್ ಸಂಭಾಷಣೆಯಲ್ಲಿಯೇ ಗೊತ್ತಾಗಿದೆ. ಜನತೆ ಮೂರ್ಖರಲ್ಲ. ಬಿಜೆಪಿಯ ಷಡ್ಯಂತ್ರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಸಚಿವ ಎಚ್.ಅಂಜನೇಯ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ