ನಾನು ಎಂದಿಗೂ ವಾಕ್ ಸ್ವಾತಂತ್ರ್ಯದ ಪರ: ಸಿಎಂ ಸಿದ್ದರಾಮಯ್ಯ

ಬುಧವಾರ, 29 ಮಾರ್ಚ್ 2017 (19:22 IST)
ನಾನು ಎಂದಿಗೂ ವಾಕ್ ಸ್ವಾತಂತ್ರ್ಯದ ಪರವಾಗಿರುವವನು. ಶಾಸಕರು, ಮಾಧ್ಯಮಗಳು ತಮ್ಮನ್ನು ತಾವೇ ಸ್ವಯಂನಿಯಂತ್ರಣ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸವಾದ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರು ಮತ್ತು ಮಾಧ್ಯಮಗಳು ಪರಸ್ಪರ ಗೌರವಿಸುವುದು ಸೂಕ್ತ. ಪರಸ್ಪರರ ಮೇಲೆ ಕೆಸರೆರಚಾಟ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
 
ಸದನ ಸಮಿತಿಯಲ್ಲಿ ಹಿರಿಯ ನಾಯಕರಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ