ಬೆಂಗಳೂರಿನ ಮಹಾರಾಣಿ ಕಾಲೇಜಿನ ವಸತಿ ನಿಲಯಕ್ಕೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ವಸತಿ ನಿಲಯದಲ್ಲಿ ನಡೆದ ಭ್ರಷ್ಟಾಚಾರ ತನಿಖೆಗೆ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿದ್ದು, 15 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಈ ದೇಶವನ್ನು ಕಟ್ಟಿ ಬೆಳೆಸಿರುವುದೇ ಕಾಂಗ್ರೆಸ್, ಬಡವರು ವಿದ್ಯಾರ್ಥಿಗಳಿಗೆ ಸೌಲಭ್ಯವನ್ನು ಒದಗಿಸಿರುವುದು ಕಾಂಗ್ರೆಸ್ ಸರಕಾರ ಮಾತ್ರ. ಅಷ್ಟೇ ಯಾಕೆ ನೀವು ಕ್ಯಾಮೆರಾ ಹಿಡಿದು ಸುದ್ದಿ ಮಾಡುತ್ತಿರಿ ಅದಕ್ಕೂ ಸಹ ಕಾಂಗ್ರೆಸ್ ಸರಕಾರವೇ ಕಾರಣವೆಂದು ಮಾಧ್ಯಮ ಮಿತ್ರರಿಗೆ ಚಟಾಕಿ ಹಾರಿಸಿದರು.