ಜಮೀನು ಅಕ್ರಮ ಮಂಜೂರು ಆರೋಪ: ಬಿಎಂಟಿಎಫ್‌ಗೆ ಶೆಟ್ಟರ್ ಗೈರುಹಾಜರು

ಬುಧವಾರ, 29 ಅಕ್ಟೋಬರ್ 2014 (14:35 IST)
ಶ್ರೀಗಂಧ ಕಾವಲ್‌ನಲ್ಲಿ ನಾಲ್ಕು ಎಕರೆ ಜಮೀನು ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಶೆಟ್ಟರ್ ಗೈರುಹಾಜರಾಗಿದ್ದು, ಅವರ  ಪರ ವಕೀಲರಾದ ವಿಕ್ರಂ ಹೆಗ್ಡೆ ಬಿಎಂಟಿಎಫ್ ಕಚೇರಿಗೆ ಹಾಜರಾಗಿದ್ದಾರೆ.

ಶೆಟ್ಟರ್ ದೆಹಲಿಯಲ್ಲಿರುವುದರಿಂದ ಅವರಿಗೆ ಬರಲಾಗಲಿಲ್ಲವೆಂದು ತಿಳಿದುಬಂದಿದೆ. ಶೆಟ್ಟರ್ ನ.5 ರಂದು ಬೆಳಿಗ್ಗೆ 11ಗಂಟೆಗೆ ಹಾಜರಾಗುವಂತೆ ಸೂಚಿಸಿದೆ. ಶ್ರೀಗಂಧ ಕಾವಲ್‌ನಲ್ಲಿ ಅಕ್ರಮ ಭೂಪರಭಾರೆ ಮಾಡಿಕೊಂಡ ಆರೋಪವನ್ನು ಶೆಟ್ಟರ್ ವಿರುದ್ಧ ಹೊರಿಸಲಾಗಿದೆ.

ನ. 5ರ ಬೆಳಿಗ್ಗೆ 11ಗಂಟೆಗೆ ಈಶ್ವರಪ್ಪ ಅವರಿಗೂ ಹಾಜರಾಗಲು ಸೂಚಿಸಲಾಗಿದೆ. 
ಶ್ರೀಗಂಧ ಕಾವಲ್‌ನಲ್ಲಿ ಗೋಲ್ಡನ್‌ ವ್ಯಾಲಿ ಎಜುಕೇಷನ್‌ ಟ್ರಸ್ಟ್‌ಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿದ್ದ ಜಮೀನಿನ ಪೈಕಿ 4 ನಾಲ್ಕು ಎಕರೆಯನ್ನು ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಪುತ್ರನಿಗೆ ಶೆಟ್ಟರ್ ಮಂಜೂರು ಮಾಡಿಸಿದ್ದರು. 

ವೆಬ್ದುನಿಯಾವನ್ನು ಓದಿ