ವೆಂಕಟೇಶ್ ಆಂಧ್ರದ ನೆಲ್ಲೂರಿನಲ್ಲಿ ಜೆಸಿಬಿ ಚಾಲಕನಾಗಿದ್ದು, ಕೆಲಸದ ನೆಪ ಹೇಳಿಕೊಂಡು ಮನೆಯಿಂದ ದೂರವಿರುತ್ತಿದ್ದ. ಹೆಂಡತಿ ಇದ್ದರೂ ಪಕ್ಕದ ಮನೆಯ ಆಂಟಿ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು ಅವಳೊಡನೆ ಸರಸಸಲ್ಲಾಪ ನಡೆಸಿದ್ದ. ಪತಿಯ ಅಕ್ರಮ ಸಂಬಂಧದ ಸುಳಿವು ಪತ್ನಿಗೆ ಸಿಕ್ಕಿತ್ತು. ಈ ಕುರಿತು ಪತ್ನಿ ಕೋರ್ಟ್ ಮೆಟ್ಟಿಲು ಏರಿದ್ದಳು.
ಆದರೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಕೋರ್ಟ್ ಸಾಕ್ಷ್ಯ ಕೇಳಿತ್ತು. ಪತಿ ತನ್ನ ಪ್ರಿಯತಮೆಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗಲೇ ಸಿನಿಮೀಯ ಶೈಲಿಯಲ್ಲಿ ಪತ್ನಿ, ಸಂಬಂಧಿಕರು ದಾಳಿ ಮಾಡಿದ್ದರು. ಅಸಲಿ ಪತ್ನಿ ಕಂಡು ಆಂಟಿ ಅಟ್ಟವೇರಿ ಕುಳಿತಿದ್ದಳು.