ಕ್ಷುಲ್ಲಕ ಕಾರಣಕ್ಕೆ ಸೊಸೆಯ ಬರ್ಬರ ಹತ್ಯೆ

ಶುಕ್ರವಾರ, 29 ಜನವರಿ 2016 (10:19 IST)
ಕ್ಷುಲ್ಲಕ ಕಾರಣಕ್ಕೆ ಸೊಸೆಯನ್ನು  ಬರ್ಬರವಾಗಿ ಹತ್ಯೆ ಮಾಡಿದ ದಾರುಣ ಘಟನೆ ಗದಗ ಜಿಲ್ಲೆಯ ಪಾಪನಾಶಿ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು 22 ವರ್ಷದ ಲಕ್ಷ್ಮೀ ವರವಿ ಎಂದು ಗುರುತಿಸಲಾಗಿದೆ. ಕೊಲೆಗೈದು ಸಾಕ್ಷ್ಯ ನಾಶ ಮಾಡಲು ಮನೆಯಲ್ಲೇ ಸೀಮೆಎಣ್ಣೆ ಸುರಿದು  ಬೆಂಕಿ ಹಚ್ಚಲಾಗಿದೆ ಎಂದು ಲಕ್ಷ್ಮೀ ಪೋಷಕರು ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
 
ಆರೋಪಿ ಪತಿ ಶಿವಕುಮಾರ್, ಅತ್ತೆಯರಾದ ರೇಣವ್ವ, ಬಸವೆಣ್ಣವ್ವ ಮತ್ತು ಮಾವ ರಾಮಪ್ಪ ವಿರುದ್ಧ ದೂರು ದಾಖಲಾಗಿದೆ. 
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ