ಬಿಬಿಎಂಪಿ ಫಲಿತಾಂಶದ ಬಳಿಕ ಅಧಿಕಾರಕ್ಕಾಗಿ ಕಾಂಗ್ರೆಸ್ - ಬಿಜೆಪಿ ನಡೆಯುತ್ತಿರುವ ಕಸರತ್ತುಗಳು ಮುಂದುವರೆದಿದ್ದು, ಪಕ್ಷೇತರರು ಮತ್ತು ಜೆಡಿಎಸ್ ಜತೆ ಮೈತ್ರಿಗಾಗಿ ಕೈ ಮತ್ತು ಕೇಸರಿ ಪಕ್ಷಗಳು ನಡೆಸುತ್ತಿರುವ ಸತಾಯಗತಾಯ ಪ್ರಯತ್ನಗಳು ಕುತೂಹಲವನ್ನು ಕೆರಳಿಸಿವೆ.
ಕೋನೆನ ಅಗ್ರಹಾರ ವಾರ್ಡ್ನ ಚುನಾಯಿತ ಸದಸ್ಯ ಚಂದ್ರಪ್ಪರೆಡ್ಡಿ, ಸಗಾಯ್ಪುರದ ಪ್ರತಿನಿಧಿ ಏಳುಮಲೈ ಹಾಗೂ ಹೊಯ್ಸಳನಗರ ವಾರ್ಡ್ ಸದಸ್ಯ ಆನಂದ್ ಕುಮಾರ್ ಬಿಜೆಪಿ ನಾಯಕ ಆರ್. ಅಶೋಕ್ ಬಳಿ 10 ಕೋಟಿ ರೂಪಾಯಿ ಮತ್ತು ಸ್ಥಾಯಿ ಸಮಿತಿಯಲ್ಲಿ ಸ್ಥಾನಮಾನವನ್ನು ನೀಡುವಂತೆ ಕೇಳಿದ್ದಾರೆ. ಆದರೆ ಸ್ಥಾಯಿ ಸಮಿತಿಯಲ್ಲಿ ಹೊಣೆಗಾರಿಕೆಯನ್ನು ನೀಡಲು ಒಪ್ಪಿರುವ ಅಶೋಕ್ ಹಣ ನೀಡಲು ಸಾಧ್ಯವಿಲ್ಲವೆಂದಿದ್ದಾರೆ ಎಂದು ಸುದ್ದಿ ಹೊರಬಿದ್ದಿದೆ.