ಮೃತ ಕಾರ್ಮಿಕನನ್ನು ಉತ್ತರ ಭಾರತ ಮೂಲದವನು ಎನ್ನಲಾಗಿದ್ದು, ಸಾಕಷ್ಟು ದಿನಗಳಿಂದ ಈ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವೈಟಿಎಸ್ಪಿ ಸಂಸ್ಥೆಯ ಕಟ್ಟಡ ಇದಾಗಿದ್ದು ಸಾಕಷ್ಟು ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ಕೂಡ ಇಂತಹ ಘಟನೆ ಇದೇ ಕಟ್ಟಡ ನಿರ್ಮಾಣ ವೇಳೆ ನಡೆದಿತ್ತು. ಇದರಿಂದ ಕಾರ್ಮಿಕರು ಸಾಕಷ್ಟು ಅವಘಡಗಳಿಗೆ ತುತ್ತಾಗುತ್ತಿದ್ದು, ಕಂಟ್ರ್ಯಾಕ್ಟರ್ ವಿರುದ್ಧ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.