ಬೆಂಗಳೂರಿನ ವಿಧಾನಸೌಧದಲ್ಲಿರುವ ದೇವರಾಜ್ ಅರಸ್ ಪ್ರತಿಮೆ ಎದುರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. 'ಗಂಡುಮೆಟ್ಟಿದ ಕನ್ನಡದ ಗ್ರಾಮಗಳಲ್ಲಿ ಮರಾಠಿ ನಾಮಫಲಕಗಳನ್ನು ಹಾಕಿದ್ದಾರೆ. ಪೊಲೀಸರು, ಜಿಲ್ಲಾಧಿಕಾರಿಗಳು ಏನು ದನ ಕಾಯ್ತಿದ್ದಾರಾ. ನಮ್ಮ ಹಳ್ಳಿಗಳಲ್ಲಿ ಈ ರೀತಿ ನಾಮಫಲಕ ಹಾಕುವುದು ಸರಿಯಲ್ಲ' ಎಂದು ಎಂಇಎಸ್ ಪುಂಡಾಟಿಕೆಗೆ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಎಸ್. ಪಿ. ಚಂದ್ರಗುಪ್ತ ಯಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜಿಲ್ಲೆಯ ಗಡಿಭಾಗದಲ್ಲಿ ನಾಕಬಂಧಿ ಹಾಕಿದ್ದೇವೆ. ಇಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿದ್ದು,ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಚಂದ್ರಗುಪ್ತ ಹೇಳಿದ್ದಾರೆ.