ಲಕ್ಷ್ಮಿಕಾಂತ್ ಮೂಲತಃ ರಾಯಚೀರಿನವರಾಗಿದ್ದರೆ, ವಿಜಯ್ ಕುಮಾರ್ ಕೋಲಾರದ ಬಂಗಾರಪೇಟೆ ನಿವಾಸಿಯಾಗಿದ್ದರು. ಈ ಇಬ್ಬರೂ ಕೂಡ ಲಿಬಿಯಾದ ಶಿರ್ತೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಜುಲೈ 27ರಂದು ಸಂಜೆ ತಮ್ಮ ತಾಯ್ನಾಡಿಗೆ ವಾಪಾಸಾಗುತ್ತಿದ್ದಾಗ ಅವರನ್ನು ಉಗ್ರರು ಅಪಹರಿಸಿದ್ದರು. ಬಳಿಕ ಒಂದು ದಿನ ತಮ್ಮ ಬಳಿ ಇರಿಸಿಕೊಂಡಿದ್ದ ಉಗ್ರರು, ಇವರನ್ನು ಮತ್ತೆ ಬಿಡುಗಡೆಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ತಾಯ್ನಾಡಿಗೆ ವಾಪಾಸಾಗಿದ್ದಾರೆ.