ಜೈಲಿನ ಉಸ್ತುವಾರಿ ಪಿ.ಎಸ್.ಅಂಬೇಕರ್, ವಾರ್ಡನ್ ಸಂಪತ್ ಮತ್ತು ಹೆಡ್ ಕಾನ್ಸ್ಟೇಬರ್ ಗುಂಡಳ್ಳಿಯವರನ್ನು ವಿಜಯಪುರ ಜಿಲ್ಲಾ ಸೂಪರಿಂಟೆಂಡೆಂಟ್ ಸಿದ್ದರಾಮಪ್ಪ, ಡಿ.ಜಿಪಿ. ಸತ್ಯನಾರಾಯಣ ಅವರ ವರದಿಯನ್ನು ಆಧರಿಸಿ ಅಮಾನತುಗೊಳಿಸಲಾಯಿತು.
ಬೆಂಗಳೂರಿನ ಪೊಲೀಸ್ ತಂಡ ಘಟನೆಯನ್ನು ಆಮೂಲಾಗ್ರವಾಗಿ ತನಿಖೆ ಮಾಡಿ ಐಟಂ ಡ್ಯಾನ್ಸ್ ವ್ಯವಸ್ಥೆ ಮಾಡಿದ್ದು ಯಾರೆಂದು ಪತ್ತೆಹಚ್ಚುವುದಾಗಿ ರಾವ್ ತಿಳಿಸಿದ್ದಾರೆ. ಕೈದಿಗಳ ಅಕ್ರಮ ಚಟುವಟಿಕೆ ಮತ್ತು ಕೆಟ್ಟ ವರ್ತನೆ ಕುರಿತು ಕಟ್ಟೆಚ್ಚರ ವಹಿಸುವಂತೆ ರಾವ್ ಅಧಿಕಾರಿಗಳಿಗೆ ತಿಳಿಸಿದ್ದು, ಕೈದಿಗಳು ಮೊಬೈಲ್ ಬಳಸದಂತೆ ಜ್ಯಾಮರ್ಗಳನ್ನು ಜೈಲಿನ ಆವರಣದಲ್ಲಿ ಅಳವಡಿಸುವುದಾಗಿ ತಿಳಿಸಿದರು.