ಪಾರಿರಾಜನ್‌ಗೆ ಖೈದಿ ಸಂಖ್ಯೆ ನೀಡಿದ ಅಗ್ರಹಾರ ಜೈಲು ಸಿಬ್ಬಂಧಿ

ಮಂಗಳವಾರ, 26 ಮೇ 2015 (11:38 IST)
ಬಹುಕೋಟಿ ಲಾಟರಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿತನಾಗಿರುವ ಪಾರಿರಾಜನ್‌ಗೆ ನಗರದ ಅಗ್ರಹಾರ ಜೈಲಿನ ಆಡಳಿತಾಧಿಕಾರಿಗಳು ಇಂದು ಅಧಿಕೃತವಾಗಿ ಖೈದಿ ಸಂಖ್ಯೆಯನ್ನು ನೀಡಿದ್ದಾರೆ. 
 
ಹೌದು, ಪಾರಿರಾಜನ್‌ನನ್ನು ನಿನ್ನೆ ಅನಾರೋಗ್ಯ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂಬ ಕಾರಣದಿಂದ ಕೋಲಾರ ನಗರದಲ್ಲಿನ ಉಪ ಕಾರಾಗೃಹದಿಂದ ಬೆಂಗಳೂರಿನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಾರಿರಾಜನ್‌ಗೆ ಇಂದು ಖೈದಿ ಸಂಖ್ಯೆಯನ್ನು ನೀಡಲಾಗಿದ್ದು, ಸಂಖ್ಯೆ ಹೀಗಿದೆ. ಆರೋಪಿ ಪಾರಿರಾಜನ್ ಖೈದಿ ಸಂಖ್ಯೆ-6693. 
 
ವಿಚಾರಣಾಧೀನ ಖೈದಿಯಾಗಿರುವ ಪಾರಿರಾಜನ್‌ನನ್ನು ಪ್ರಕರಣದ ಪ್ರಮುಖ ಕಿಂಗ್‌ಪಿನ್ ಆಗಿದ್ದಾನೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಕಳೆದ ಮೇ 16ರಂದು ಬಂಧಿಸಿದ್ದರು. 

ವೆಬ್ದುನಿಯಾವನ್ನು ಓದಿ