ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ಧನರೆಡ್ಡಿ, ನಮ್ಮ ತಂದೆ ತಾಯಿಗಳೂ ಮೊದಲು ಎರಡು ವರ್ಷಗಳ ಕಾಲ ಮೈಸೂರಿನಲ್ಲಿಯೇ ತಂಗಿದ್ದರು. ಆಗಿನಿಂದಲೂ ಕೂಡ ದೇವಿಯ ದರ್ಶನ ಪಡೆಯುತ್ತಿದ್ದು, ಪ್ರಸ್ತುತವೂ ಬಂದಿದ್ದೇನೆ. ಹರಕೆ ತೀರಿಸುವ ಸಲುವಾಗಿ ಬಂದಿದ್ದೇನೆಯೇ ಹೊರತು ಬೇರಾವ ಉದ್ದೇಶದಿಂದಲೂ ಅಲ್ಲ ಎಂದು ಸ್ಪಷ್ಟಪಡಿಸಿದರು.