ಜಯಲಲಿತಾ ಹಣೆಬರಹ ಇಂದು ನಿರ್ಧಾರವಾಗಲಿದ್ದು, ಒಂದು ವೇಳೆ ವಿಶೇಷ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಅಮಾನತನಲ್ಲಿಟ್ಟು ಅವರಿಗೆ ಜಾಮೀನು ನೀಡುತ್ತಾರಾ ಎನ್ನುವ ಕುತೂಹಲ ಕೆರಳಿಸಿದೆ. ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಅವರು ಜಯಾ ಪರ ವಕಾಲತ್ತು ವಹಿಸಲಿದ್ದು, ನ್ಯಾ. ರತ್ನಕಲಾ ಅವರು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಜಯಲಲಿತಾ ಶಿಕ್ಷೆ ಅಮಾನತಿನಲ್ಲಿಡುವುದಕ್ಕೆ ಮತ್ತು ಶಿಕ್ಷೆಗೆ ತಡೆ ನೀಡುವುದಕ್ಕೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.