ಅನಿವಾರ್ಯವಾದಲ್ಲಿ ಜೆಡಿಎಸ್ ಶಾಸಕರು ಶ್ರೀಲಂಕಾಗೆ ಪ್ರಯಾಣ?

ಶನಿವಾರ, 29 ಆಗಸ್ಟ್ 2015 (17:57 IST)
ಕೇರಳದ ಕೊಚ್ಚಿ ರಿಸಾರ್ಟ್‌ಗೆ ತೆರಳುತ್ತಿರುವ ಜೆಡಿಎಸ್ ಕಾರ್ಪೋರೇಟರ್‌ಗಳು ಪಕ್ಷೇತರ ಕಾರ್ಪೋರೇಟರ್‌ಗಳೊಂದಿಗೆ ರಿಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಿದ್ದು, 15 ಕೋಣೆಗಳನ್ನು ಬುಕ್ ಮಾಡಲಾಗಿದೆ. ಅನಿವಾರ್ಯವಾದಲ್ಲಿ ಕಾರ್ಪೋರೇಟರ್‌ಗಳನ್ನು ಶ್ರೀಲಂಕಾಗೆ ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
  
ಕಾಂಗ್ರೆಸ್ ಶಾಸಕರಾದ ಮುನಿರತ್ನ, ಬೈರತಿ ಬಸವರಾಜ್ ಕಾರ್ಪೋರೇಟ್‌ರುಗಳ ಪ್ರವಾಸದ ಉಸ್ತುವಾರಿಯನ್ನು ಹೊತ್ತಿದ್ದು ಕೇರಳದ ಕೊಚ್ಚಿಯಲ್ಲಿರುವ ಲೇಕ್ ಪ್ಯಾಲೇಸ್ ಬೀಚ್ ರಿಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. 
 
ಜೆಡಿಎಸ್ ಶಾಸಕರಾದ ಅಖಂಡ್ ಶ್ರೀನಿವಾಸ್ ಮೂರ್ತಿ ಮತ್ತು ಕೆ.ಗೋಪಾಲಯ್ಯ ಕೂಡಾ ಇಂದು ರಾತ್ರಿ ಕೇರಳದ ಕೊಚ್ಚಿ ರಿಸಾರ್ಟ್‌ಗೆ ಪ್ರಯಾಣ ಬೆಳಸಲಿದ್ದಾರೆ.
 
ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ತಮ್ಮ ಒಡೆತನದಲ್ಲಿರುವ ಗೆಸ್ಟ್‌ಹೌಸ್‌ನಲ್ಲಿದ್ದ 14 ಕಾರ್ಪೋರೇಟರ್‌ಗಳನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದು, ಇಂದು ಸಂಜೆ ವಿಮಾನದಲ್ಲಿ ಕಾರ್ಪೋರೇಟರ್‌ಗಳು ಕೊಚ್ಚಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.   

ವೆಬ್ದುನಿಯಾವನ್ನು ಓದಿ