ಕೇರಳದ ಕೊಚ್ಚಿ ರಿಸಾರ್ಟ್ಗೆ ತೆರಳುತ್ತಿರುವ ಜೆಡಿಎಸ್ ಕಾರ್ಪೋರೇಟರ್ಗಳು ಪಕ್ಷೇತರ ಕಾರ್ಪೋರೇಟರ್ಗಳೊಂದಿಗೆ ರಿಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದು, 15 ಕೋಣೆಗಳನ್ನು ಬುಕ್ ಮಾಡಲಾಗಿದೆ. ಅನಿವಾರ್ಯವಾದಲ್ಲಿ ಕಾರ್ಪೋರೇಟರ್ಗಳನ್ನು ಶ್ರೀಲಂಕಾಗೆ ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ತಮ್ಮ ಒಡೆತನದಲ್ಲಿರುವ ಗೆಸ್ಟ್ಹೌಸ್ನಲ್ಲಿದ್ದ 14 ಕಾರ್ಪೋರೇಟರ್ಗಳನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದು, ಇಂದು ಸಂಜೆ ವಿಮಾನದಲ್ಲಿ ಕಾರ್ಪೋರೇಟರ್ಗಳು ಕೊಚ್ಚಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.