ಬಿಬಿಎಂಪಿ ಅವಾಂತರ: ಜೆಡಿಎಸ್ ಕಾರ್ಪೋರೇಟರ್‌ಗಳು ಕೇರಳದ ಕೊಚ್ಚಿಗೆ ಶಿಫ್ಟ್

ಶನಿವಾರ, 29 ಆಗಸ್ಟ್ 2015 (17:02 IST)
ಬಿಜೆಪಿ ಕಾರ್ಪೋರೇಟರ್‌ಗಳ ಖರೀದಿಗೆ ಪ್ರಯತ್ನಿಸುತ್ತಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ 14 ಶಾಸಕರನ್ನು ಕೇರಳದ ಕೊಚ್ಚಿಗೆ ಶಿಫ್ಟ್ ಮಾಡಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಶಾಸಕ ಜಮೀರ್ ಗೆಸ್ಟ್‌‍ಹೌಸ್‌ನಲ್ಲಿರುವ 14 ಕಾರ್ಪೋರೇಟರ್‌ಗಳು ಇಂದು ಶಾಸಕ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಕೊಚ್ಚಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕೇರಳದ ಕೊಚ್ಚಿಗೆ ತೆರಳಿ ಅಲ್ಲಿಂದ ರಿಸಾರ್ಟ್‌ಗೆ ತೆರಳಲಿದ್ದಾರೆ. ಶಾಸಕ ಜಮೀರ್ ಬೆಂಗಳೂರಿನಲ್ಲಿಯೇ ಉಳಿಯಲಿದ್ದು, ರಾಜಕೀಯ ಬೆಳವಣಿಗೆಗಳನ್ನು ಗಮನಿಸಲಿದ್ದಾರೆ ಎಂದು ಜೆಡಿಎಸ್ ನಾಯಕರು ತಿಳಿಸಿದ್ದಾರೆ.
 
ನಾಲ್ಕು ವಿಮಾನಗಳಲ್ಲಿ ಜೆಡಿಎಸ್ ಕಾರ್ಪೋರೇಟರ್‌ಗಳು ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.   
 

ವೆಬ್ದುನಿಯಾವನ್ನು ಓದಿ