ಕಾಂಗ್ರೆಸ್ ಅಭ್ಯರ್ಥಿ ಮಮತಾ ಪತಿಯ ಅಪಹರಣ: ಜೆಡಿಎಸ್ ನಾಯಕರ ವಿರುದ್ಧ ದೂರು

ಶನಿವಾರ, 6 ಫೆಬ್ರವರಿ 2016 (12:57 IST)
ರಾಮಸಂದ್ರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಮತಾ ತಮ್ಮ ಪತಿಯನ್ನು ಜೆಡಿಎಸ್ ಮುಖಂಡರು ಅಪಹರಿಸಿದ್ದಾರೆ ಎಂದು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಜೆಡಿಎಸ್ ನಾಯಕರಾದ ಪ್ರಭು ಮತ್ತು ನರಹರಿ ನಿನ್ನೆ ಬೋರನಹಳ್ಳಿಯಿಂದ ಪತಿ ನಾಗರಾಜ್‌ರನ್ನು ಅಪಹರಿಸಿದ್ದಾರೆ ಎಂದು ಮಮತಾ ಪೊಲೀಸರಿಗೆ ದೂರು ನೀಡಿದ್ದಾರೆ.
 
ಆದರೆ, ಇಂದು ಬೆಳಿಗ್ಗೆ ನಾನು ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ನಾಗರಾಜ್ ಪೊಲೀಸರಿಗೆ ಮಾಹಿತಿ ನೀಡಿ ಜೆಡಿಎಸ್ ಮುಖಂಡರಾದ ಪ್ರಭು ಮತ್ತು ನರಹರಿ ನನ್ನನ್ನು ಗೋವಾಗೆ ಕರೆದುಕೊಂಡು ಅಪಹರಿಸಿಕೊಂಡು ಹೋಗಲು ಟಿಕೆಟ್ ಕೂಡಾ ಬುಕ್ ಮಾಡಿದ್ದರು ಎಂದು ತಿಳಿಸಿದ್ದಾರೆ.
 
ಈ ಸಂದರ್ಭದಲ್ಲಿ ಯಶ್ವಂತಪುರದ ಕಾಂಗ್ರೆಸ್ ಶಾಸಕರಾದ ಎಸ್.ಟಿ. ಸೋಮಶೇಖರ್ ಕೂಡಾ ಉಪಸ್ಥಿತರಿದ್ದು ಜೆಡಿಎಸ್ ಮುಖಂಡರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ