ಮಂಡ್ಯ ನಗರದ ಸಿಲ್ವರ್ ಜುಬಿಲಿ ಪಾರ್ಕ್ನಲ್ಲಿ ಸಮಾವೇಶ ಆಯೋಜಿಸಲಾಗಿದೆ. ಶಕ್ತಿ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಡಿಎಸ್ ವರಿಷ್ಛ ಎಚ್.ಡಿ.ದೇವೇಗೌಡ, ನೂತನವಾಗಿ ಆಯ್ಕೆಯಾದ ಶಾಸಕರು ಜನಪರ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಎಚ್.ಡಿ.ರೇವಣ್ಣ, ಸಂಸದ ಪುಟ್ಟರಾಜು, ಶಾಸಕ ಜಿ.ಟಿ ದೇವೇಗೌಡ. ಸಾ.ರಾ ಮಹೇಶ್, ಡಿ.ಸಿ ತಮ್ಮಣ್ಣ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು, ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸೇರಿರುವುದು ದೇವೇಗೌಡರಿಗೆ ಸಂತಸ ತಂದಿತ್ತು ಎನ್ನಲಾಗಿದೆ.