ರುದ್ರಮನಿ ಮೃತಪಟ್ಟ ನಂತರ ಕೊಠಡಿಯಲ್ಲಿ ದೆವ್ವ ಓಡಾಡುತ್ತಿದೆ ಎಂಬ ಪುಕಾರು ಹಬ್ಬಿದೆ. ಕೋರ್ಟ್ ಆವರಣದ ಪ್ರವೇಶ ದ್ವಾರದಲ್ಲೇ ಇರುವ ಈ ಕೋಣೆಯನ್ನು ಈಗ ಸ್ಟೋರ್ರೂಂಗೆ ಪರಿವರ್ತಿಸಲಾಗಿದ್ದು, ಮುರಿದ ಕುರ್ಚಿಗಳು ಮತ್ತು ಮೇಜುಗಳನ್ನು ಇರಿಸಲಾಗಿದೆ. ಮೂಲಗಳ ಪ್ರಕಾರ ಈ ಹಾಲ್ ಗೆ ದೆವ್ವದ ಕೋಣೆಯೆಂದೇ ಕರೆಯಲಾಗುತ್ತಿದೆ. ವಿಚಿತ್ರವೆಂದರೆ ನ್ಯಾಯಾಧೀಶರು ನಿಧನರಾದ ನಂತರ ಕೋರ್ಟ್ ಅಧಿಕಾರಿಗಳು ಈ ಕೋಣೆಯ ಬಾಗಿಲನ್ನು ತೆರೆದೇ ಇಲ್ಲದಿರುವುದು ದೆವ್ವದ ಕೋಣೆ ಎಂಬ ವದಂತಿಗೆ ಪುಷ್ಠಿ ನೀಡಿದೆ.
ಜ್ಯೋತಿಷಿಯೊಬ್ಬರು ದುಷ್ಟ ಶಕ್ತಿಗಳ ನಿಗ್ರಹಕ್ಕೆ ವಿಶೇಷ ಪೂಜೆ ಮಾಡುವ ತನಕ ಕೋರ್ಟ್ ಹಾಲ್ಗೆ ಬೀಗ ಹಾಕಿಡಬೇಕೆಂದು ಸಲಹೆ ಮಾಡಿದ್ದರೆಂದು ಮೂಲವೊಂದು ಹೇಳಿದೆ. ಈಗ ಸುಮಾರು 90 ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ಈ ವದಂತಿಗಳನ್ನು ಖಂಡಿಸಿ, ತನಿಖೆಗೆ ಆದೇಶಿಸಿದ್ದಾರೆ. ಮೃತಪಟ್ಟ ನ್ಯಾಯಾಧೀಶರು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಈ ರೀತಿ ವದಂತಿಗಳನ್ನು ಹಬ್ಬಿಸುವುದರಿಂದ ವಕೀಲರು ಮತ್ತು ನ್ಯಾಯಾಧೀಶರ ಸಮುದಾಯಕ್ಕೆ ಹಾನಿಯಾಗುತ್ತದೆ ಎಂದಿದ್ದಾರೆ.