ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪಗೆ ಕೆ.ಬಿ ಶಾಣಪ್ಪ ತರಾಟೆ

ಶನಿವಾರ, 6 ಮೇ 2017 (17:36 IST)
ದಲಿತ ನಾಯಕ, ಅಸ್ಪಶ್ಯ್ರತೆ ವಿರುದ್ಧ ಹೋರಾಡಿದ ನಾಯಕ ಎಂದು ಯಾಕೆ ಹೇಳುತ್ತೀರಾ? ಬಿಜೆಪಿ ಮುಖಂಡ, ನಾಯಕ ಎಂದು ಯಾಕೆ ಹೇಳುವುದಿಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ವಿಧಾನಪರಿಷತ್ ಕೆ.ಬಿ.ಶಾಣಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ
 
ಸಂಸದೆ ಶೋಭಾ ಕರಂದ್ಲಾಜೆ ಶಾಣಪ್ಪ  ದಲಿತ ನಾಯಕ, ಅಸ್ಪಶ್ಯ್ರತೆ ವಿರುದ್ಧ ಹೋರಾಡಿದ ನಾಯಕ ಎಂದು ಹೇಳುತ್ತಿರುವಂತೆ ತಿರುಗೇಟು ನೀಡಿದ ಶಾಣಪ್ಪ, ನಮ್ಮನ್ಯಾಕೆ ಬಿಜೆಪಿ ಮುಖಂಡ ಎಂದು ಹೇಳುವುದಿಲ್ಲ ಎಂದು ಕಿಡಿಕಾರಿದರು.
 
ಪಕ್ಷದ ಹೈಕಮಾಂಡ್‌ಗೆ ಅರ್ಥವಾಗಲಿ ಎನ್ನುವ ಕಾರಣದಿಂದ ಕೆ.ಬಿ.ಶಾಣಪ್ಪ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರು.
 
ಮನೆಯಲ್ಲಿ ಎಲ್ಲರು ಒಂದಾಗಿರಬೇಕು. ಒಬ್ಬೊಬ್ಬರು ಒಂದೊಂದು ಬಣ ಕಟ್ಟಿಕೊಂಡರೆ ಏನರ್ಥ? ಒಗ್ಗಟ್ಟಾಗಿದ್ದರೆ ಚುನಾವಣೆ ಗೆಲ್ಲಲು ಸಾಧ್ಯವಾಗುತ್ತದೆ. ಈಶ್ವರಪ್ಪ ಸಂಘಟನೆಯಿಂದ ಬಂದವರು ಪಕ್ಷದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪ ಮುಂದಿನ ಸಿಎಂ ಅಭ್ಯರ್ಥಿಯಾಗಿರುವುದರಿಂದ ಎಲ್ಲರನ್ನು ಕೂಡಿಸಿಕೊಂಡು ಹೋಗಬೇಕು ಎಂದರು.
 
ವಿಧಾನಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಂಡಿಸಿದ ನಿರ್ಣಯದ ಪರವಾಗಿ ಮಾತನಾಡಿದ ಶಾಣಪ್ಪ, ನಮ್ಮ ಮನೆಯನ್ನು ಸರಿಯಾಗಿಸಿಕೊಳ್ಳದೇ ಇತರ ಮನೆಯನ್ನು ಸರಿಮಾಡುವುದು ಸರಿಯೇ ಎಂದು ಹಿರಿಯ ಬಿಜೆಪಿ ಮುಖಂಡ ಕೆ.ಬಿ.ಶಾಣಪ್ಪ ಪ್ರಶ್ನಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ