ಬಿಎಸ್‌ವೈ ವಿರುದ್ಧ ಕೆಲ ಬಿಜೆಪಿ ಮುಖಂಡರ ಅಸಮಾಧಾನ

ಸೋಮವಾರ, 6 ಮಾರ್ಚ್ 2017 (15:35 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಯ ವಿರುದ್ಧ ಅಸಮಾಧಾನಗೊಂಡಿರುವ ಬಿಜೆಪಿ ಮುಖಂಡರು ಇಂದು ಸಭೆ ನಡೆಸಿ ತಮ್ಮ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಎಸ್‌ವೈ ಕಾರ್ಯವೈಖರಿಯಿಂದ ಆಕ್ರೋಶಗೊಂಡ 23 ಬಿಜೆಪಿ ಮುಖಂಡರು ಇಂದು ಸಂಜೆ 4.30 ಗಂಟೆಗೆ ತುರ್ತು ಸುದ್ದಿಗೋಷ್ಠಿ ನಡೆಸಿ ತಮ್ಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಈಶ್ವರಪ್ಪ ಬಣದ ಮುಖಂಡರು ತಿಳಿಸಿದ್ದಾರೆ.
 
ಶಾಸಕರ ಭವನದಲ್ಲಿ ಅತೃಪ್ತರು ಸಭೆ ನಡೆಸಿದ ನಂತರ ಬಿಜೆಪಿ ಮುಖಂಡ ಸೊಗಡು ಶಿವಣ್ಣ ನೇತೃತ್ವದಲ್ಲಿ 4.30 ಗಂಟೆಗೆ ತುರ್ತು ಸುದ್ದಿಗೋಷ್ಠಿ ನಡೆಸಲಿದ್ದಾರೆ.
 
ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ್ಯ ಅಮಿತ್ ಶಾ ನಡೆಸಿದ ಸಂಧಾನದಂತೆ ಯಡಿಯೂರಪ್ಪ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ರಾಜ್ಯ ಬಿಜೆಪಿ ಘಟಕದಲ್ಲಿ ಗೊಂದಲ ಮುಂದುವರಿದಿದೆ ಎಂದು ಈಶ್ವರಪ್ಪ ಬಣದ ಮುಖಂಡರು ಕಿಡಿಕಾರಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ