ಪ್ರಸ್ತುತ ಕಲಾಂ ಮನೆ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಅವರ ನಿವಾಸದ ಹೊರ ಭಾಗದಲ್ಲಿ ಕಲಾಂ ಅವರ ಭಾವಚಿತ್ರವನ್ನಿಡಲಾಗಿದ್ದು, ಸಾರ್ವಜನಿಕರು ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸುತ್ತಿದ್ದಾರೆ. ಕಲಾಂ ನಿಧನ ಹಿನ್ನೆಲೆಯಲ್ಲಿ ಯಾವುದೇ ಭೇದ ಭಾವವಿಲ್ಲದೆ ಗ್ರಾಮದ ಎಲ್ಲಾ ಸಾರ್ವಜನಿಕರು ಮನೆಗೆ ಭೇಟಿ ನೀಡುತ್ತಿದ್ದು, ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಕಲಾಂ ಅವರ ಶರೀರವು ಗುರುವಾರ ಬೆಳಗ್ಗೆ ಗ್ರಾಮಕ್ಕೆ ತರಲಾಗುತ್ತಿದ್ದು, ಅಂದೇ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಂದ ಕುಮಾರ್ ನೇತೃತ್ವದಲ್ಲಿ ಈಗಾಗಲೇ ಮೂರು ಸ್ಥಳಗಳನ್ನು ಅಂತ್ಯಕ್ರಿಯೆಗಾಗಿ ಗುರುತಿಸಿಲಾಗಿದೆ. ರಾಮೇಶ್ವರಂ ರೈಲ್ವೆ ನಿಲ್ದಾಣ, ಕಾಚುವಳ್ಳಿ ಹಾಗೂ ನಟರಾಜಪುರಂ ಗುರುತಿಸಿದ ಸ್ಥಳಗಳಾಗಿವೆ.