ಹಿಂದಿ ಅಧಿಕಾರಿಗಳ ದೌರ್ಜನ್ಯಕ್ಕೆ ಕನ್ನಡಿಗ ಬಲಿ!

ಮಂಗಳವಾರ, 17 ಜನವರಿ 2017 (12:23 IST)
ಹಿಂದಿ ಅಧಿಕಾರಿಗಳ ದೌರ್ಜನ್ಯಕ್ಕೆ ಬೇಸತ್ತು ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದ ಕರ್ನಾಟಕ ಮೂಲದ ಎಸ್‌ಐ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.
ಮೃತರನ್ನು ದಾವಣಗೆರೆ ಮೂಲದ ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದೆ. ಹಲ್ಲು ನೋವು ಎಂದು ನೆಪ ನೀಡಿ ಟ್ರೈನಿಂಗ್ ಸೆಂಟರ್‌ನಿಂದ ಹೊರ ಬಂದ ಈತ ನಿನ್ನೆ ಸಂಜೆ ನಿಜಾಮುದ್ದೀನ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
 
ಹಿಂದಿ ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ದೆಹಲಿಯ ಅಧಿಕಾರಿಗಳು ಟ್ರೈನಿ ಎಸ್‌‌ಐ ತಿಪ್ಪೇಸ್ವಾಮಿಗೆ ಪದೇ ಪದೇ ನಿಂದಿಸುತ್ತಿದ್ದರು. ಅಧಿಕಾರಿಗಳ ಭಾಷಾ ಜನಾಂಗೀಯ ದೌರ್ಜನ್ಯಕ್ಕೆ ಬೇಸತ್ತು ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ