ಹಾಡುವುದು ಸಮಾಜವಾದ ಮಾಡುವುದು ಮಜಾವಾದ, ವಾಚ್ ಹಗರಣ ಮುಚ್ಚಿ ಹಾಕಲು ರೈತರ ನೆತ್ತರು ಹರಿಸಿದ ಸರ್ಕಾರಕ್ಕೆ ಧಿಕ್ಕಾರ, ವಾಚ್ ಹಗರಣ ಸಿಬಿಐಗೆ ಒಪ್ಪಿಸಿ - ಹೀಗೆ ಬರೆದಿದ್ದ ಫಲಕಗಳನ್ನು ಹಿಡಿದುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ, ನಳಿನ್ ಕುಮಾರ್ ಕಟೀಲು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.