ವಿದ್ಯಾಭ್ಯಾಸಕ್ಕೆ ಜರ್ಮನಿಗೆ ತೆರಳಿದ್ದ ಬಾಗಲಕೋಟೆ ಯುವಕ ನಾಪತ್ತೆ

ಗುರುವಾರ, 22 ಜೂನ್ 2017 (12:11 IST)
ವಿದ್ಯಾಭ್ಯಾಸಕ್ಕೆಂದು ಜರ್ಮನಿಗೆ ತೆರಳಿದ್ದ ಬಾಗಲಕೋಟೆಯ ಯುವಕ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
 

ಎಂಎಸ್ ಮಾಡಲು ಬಾಗಲಕೋಟೆ ಜಿಲ್ಲೆಯ ಸೀಮಿಕೇರಿಯ ಯುವಕ ಮಂಜುನಾಥ್ ಒಂದೂವರೆ ವರ್ಚದ ಹಿಂದೆ ಜರ್ಮನಿಯ ಹ್ಯಾಮ್ಸ್ ಬರ್ಗ್`ಗೆ ತೆರಳಿದ್ದರು. ಇದೀಗ ಯುವಕ ನಾಪತ್ತೆಯಾಗಿದ್ದಾನೆಂದು ಜರ್ಮನಿಯಿಂದ ಸಂದೇಶ ಬಂದಿದೆ.

ಹ್ಯಾಮ್ಸ್ ಬರ್ಗ್ ನದಿ ದಡದಲ್ಲಿ ಮಂಜುನಾಥ್`ಗೆ ಸೇರಿದ ಸೈಕಲ್, ಚಪ್ಪಲಿ ಮತ್ತು ಪತ್ರಗಳು ಸಿಕ್ಕಿದ್ದು, ಅವು ಮಂಜುನಾಥ್ ಸೇರಿದ್ದವುಗಳಾಗಿವೆ ಎಂದು ಜರ್ಮನ್ನಿ ಆತನ ಸ್ನೇಹಿತ ಹೇಳಿದ ಎಂದು ಹ್ಯಾಮ್ಸ್ ಬರ್ಗ್ ಪೊಲೀಸರು ಬಾಗಲಕೋಟೆ ಎಸ್`ಪಿಗೆ ಮಾಹಿತಿ ಮಾಹಿತಿ ರವಾನಿಸಿದ್ದಾರೆ. ಕಳೆದ ಭಾನುವಾರದಿಂದ ಯುವಕ ಕುಟುಂಬದಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ, ಕುಟುಂಬಸ್ಥರು ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರಮೋದಿ ಮೊರೆ ಹೋಗಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ