ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ

ಮಂಗಳವಾರ, 30 ಮೇ 2017 (11:48 IST)
ಬೆಂಗಳೂರು: ಪ್ರಸಕ್ತ ಸಾಲಿನ ಇಂಜಿನಿರಿಂಗ್ ಹಾಗೂ ವೃತ್ತಿಪರ ಶಿಕ್ಷಣದ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.

 
ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ರಾಂಕ್ ವಿಜೇತರ ಪಟ್ಟಿಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಿದರು. ಇಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಪ್ರತೀಕ್ ನಾಯಕ್ ಇಂಜಿನಿಯರಿಂಗ್ ನಲ್ಲಿ ಪ್ರಥಮ ರಾಂಕ್ ಪಡೆದಿದ್ದಾರೆ.

ದ್ವಿತೀಯ ಸ್ಥಾನ ಬೆಂಗಳೂರಿನ ಸುಮಂತ್ ಹೆಗಡೆ ಮತ್ತು ಅನಿರುದ್ಧ್ ಗೆ ಮೂರನೇ ಸ್ಥಾನ.  ಹೋಮಿಯೋಪತಿ ವಿಭಾಗದಲ್ಲಿ ಬೆಂಗಳೂರಿನ ರಕ್ಷಿತಾ ರಮೇಶ್ ಟಾಪರ್. ದ್ವಿತೀಯ ಸ್ಥಾನ ದಾವಣೆಗೆರೆಯ ವಿಕ್ಟರ್ ಥಾಮಸ್ ಪಾಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ