ರಾಜ್ಯಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ 70 ಲಕ್ಷ ರೂ. ಮೌಲ್ಯದ ಹೂಬ್ಲೊಟ್ ಕೈಗಡಿಯಾರದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದಿನಕ್ಕೊಂದು ಮಾಹಿತಿ ಬಹಿರಂಗ ಪಡಿಸುತ್ತಿರುವುದು ಸಿದ್ದರಾಮಯ್ಯ ನಿದ್ದೆಗೆಡಿಸಿ ಬಿಟ್ಟಿತ್ತು. ನಿಯಮದ ಪ್ರಕಾರ, ಯಾವುದೇ ಮೌಲ್ಯಯುತ ವಸ್ತುವನ್ನು ಸ್ವತಃ ಖರೀದಿಸಿದ್ದರೂ, ಇಲ್ಲವೇ ಉಡುಗೊರೆ ರೂಪದಲ್ಲಿ ಪಡೆದಿದ್ದರೂ ಆಸ್ತಿ ವಿವರದಲ್ಲಿ ನಮೂದಿಸಬೇಕು. ಆದರೆ ಸಿದ್ದರಾಮಯ್ಯನವರು ಕಳೆದ ವರ್ಷ ತಾವು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಆಸ್ತಿವಿವರದಲ್ಲಿ ವಾಚ್ ಬಗ್ಗೆ ನಮೂದಿಸಿರಲಿಲ್ಲ.
ಸಿಎಂ ದುಬಾರಿ ವಾಚ್ ವಿವಾದವನ್ನು ಸಂಸತ್ತಿನಲ್ಲಿ ಮತ್ತು ವಿಧಾನಸಭಾ ಕಲಾಪದಲ್ಲಿ ಎತ್ತಲು ಬಿಜೆಪಿ ಕಾದು ಕುಳಿತಿದೆ. ಸಿಎಂ ವಾಚ್ ಡಾಕ್ಯುಮೆಂಟ್ಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಎಲ್ಲರ ಕುತೂಹಲ ಕೆರಳಿಸಿದೆ.