ಕರ್ನಾಟಕ ದೇಶದ ಭಾಗ ಎಂದು ಸ್ಮೃತಿ ಇರಾನಿಗೆ ನೆನಪಿಸಿದ ಸಿ.ಟಿ.ರವಿ

ಮಂಗಳವಾರ, 20 ಡಿಸೆಂಬರ್ 2016 (19:29 IST)
ಕರ್ನಾಟಕ ಸಹ ಭಾರತ ದೇಶದ ಒಂದು ರಾಜ್ಯ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಬಿಜೆಪಿ ಶಾಸಕ ಸಿ.ಟಿ.ರವಿ ನೆನಪಿಸಿದ್ದಾರೆ.
ನೇಕಾರ ವೃತ್ತಿಯವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ, 'ಇ ಧಾಗ' ಹೆಸರಿನ ಆ್ಯಪ್ ಉದ್ಘಾಟಿಸಿದ್ದರು. ಈ ಆ್ಯಪ್ ಹಿಂದೆ, ಇಂಗ್ಲೀಷ್ ಹಾಗೂ ತೆಲುಗು ಭಾಷೆಯಲ್ಲಿ ಲಭ್ಯವಿದ್ದು, ಶೀಘ್ರದಲ್ಲಿಯೇ ತಮಿಳು, ಒರಿಯಾ, ಬೆಂಗಾಲಿ, ಉರ್ದು ಮತ್ತು ಅಸ್ಸಾಮಿ ಭಾಷೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಿದ್ದರು. 
 
ಆದರೆ, 'ಇ ಧಾಗ' ಆ್ಯಪ್ ಕನ್ನಡ ಭಾಷೆಯಲ್ಲಿ ಇಲ್ಲದುದರ ಕುರಿತು ಬಿಜೆಪಿ ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ. ಸ್ಮೃತಿ ಇರಾನಿ ಅವರೇ, ಕರ್ನಾಟಕ ಸಹ ಭಾರತ ದೇಶದ ಒಂದು ಭಾಗ, ಹೀಗಾಗಿ 'ಇ ಧಾಗ' ಆ್ಯಪ್‌ನ್ನು ಕನ್ನಡದಲ್ಲಿಯೂ ಸಹ ಶೀಘ್ರವೇ ಪರಿಚಯಿಸಿ, ಜೊತೆಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ