ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಎಲ್ಲಾ ಸಚಿವರು ಹಾಜರಿರಬೇಕು ಎಂದು ಕೆಪಿಸಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಆದಾಗ್ಯೂ ಹಿರಿಯ ಸಚಿವರಾದ ಶ್ಯಾಮನೂರ್ ಶಿವಶಂಕರಪ್ಪ, ವಸತಿ ಸಚಿವ ಅಂಬರೀಷ್, ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಸೇರಿದಂತೆ ಒಟ್ಟು 15 ಸಚಿವರು ಗೈರುಹಾಜರಾಗಿದ್ದರು.
15 ಸಚಿವರ ಗೈರುಹಾಜರಿ ರಾಹುಲ್ ಗಾಂಧಿಯವರಿಗೆ ತೋರಿದ ಅಗೌರವವಾಗಿರುವ ಸ್ಪಷ್ಟ ಸಂಕೇತವಾಗಿದ್ದು, ಗೈರುಹಾಜರಾದ ಸಚಿವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ರಾಜ್ಯದ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಕೆಪಿಸಿಸಿಗೆ ಆದೇಶ ನೀಡಿದ್ದರು ಎನ್ನಲಾಗಿದೆ.