ಕಾರ್ತಿಕ್ ನನ್ನನ್ನು ಪತ್ನಿಯಾಗಿ ಸ್ವೀಕರಿಸಲೇಬೇಕು: ಮೈತ್ರಿಯಾ ಗೌಡ

ಗುರುವಾರ, 28 ಆಗಸ್ಟ್ 2014 (20:09 IST)
ಕೇಂದ್ರ ರೇಲ್ವೆ ಸಚಿವ ಸದಾನಂದಾಗೌಡ ಪುತ್ರ ಕಾರ್ತಿಕ್‌ಗೌಡ ನನಗೆ ದೇವರ ಸಾಕ್ಷಿಯಾಗಿ ತಾಳಿ ಕಟ್ಟಿದ್ದಾರೆ ಹೀಗಾಗಿ ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳಬೇಕು ಎಂದು ಮೈತ್ರಿಯಾ ಗೌಡ ಆಗ್ರಹಿಸಿದ್ದಾರೆ.
 
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈತ್ರಿಯಾ ಗೌಡ, ನಮ್ಮ ಹಿಂದು ಸಂಪ್ರದಾಯದಂತೆ ಕಾರ್ತಿಕ್ ನನಗೆ ಹರಿಶಿನ ತಾಳಿ ಕಟ್ಟಿದ್ದು, ಆ ಮೂಲಕ ನಾನು ಅವರ ಹೆಂಡತಿಯಾಗಿದ್ದೇನೆ ಹೀಗಾಗಿ ಕಾರ್ತಿಕ್ ನನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳಲೇಬೇಕು. ಆ ಮೂಲಕ ಡಿವಿ ಸದಾನಂದಗೌಡ ಅವರು ನನ್ನನ್ನು ಸೊಸೆಯೆಂದು ಒಪ್ಪಿಕೊಳ್ಳಲಿ ಎಂದು ಕಣ್ಣಿರೀಟ್ಟರು.
 
ಪ್ರಕರಣ ಹಿನ್ನೆಲೆ
 
ಕಾರ್ತಿಕ್ ಪರಿಚಯವಾಗಿದ್ದು ಕುಶಾಲ್ ಎಂಬುವರು ಮೂಲಕ. ಆನಂತರ ಹಲವು ಬಾರಿ ನನ್ನನ್ನು ಭೇಟಿ ಮಾಡಿದ್ದರು. ಪ್ರತಿ ಸಲ ಕರೆ ಮಾಡುತ್ತಿದ್ದಾಗಲು ಕಾರ್ತಿಕ್ ನನ್ನನ್ನು ಐ ಲವ್ ಯೂ ಎಂದು ಹೇಳುತ್ತಿದ್ದರು. ಬಳಿಕ ಕಾರ್ತಿಕ್ ನನ್ನ ಜೊತೆ ದೈಹಿಕ ಸಂಪರ್ಕ ಸಾಧಿಸಲು ಒತ್ತಾಯಿಸುತ್ತಿದ್ದರು. ಆದರೆ ನಮ್ಮ ಮದುವೆ ನಂತರ ದೈಹಿಕವಾಗಿ ಸಂಪರ್ಕ ಮಾಡೋನಾ ಎಂದು ತಿಳಿಸಿದ್ದೆ. ಹೀಗಾಗಿ ಕಾರ್ತಿಕ್ ಮಂಗಳೂರಿನಲ್ಲಿರುವ ಅವರ ಮನೆಯಲ್ಲಿ ತಾಳಿ ಕಟ್ಟಿ ಮದುವೆಯಾಗಿದ್ದರು ಎಂದು ಹೇಳಿದರು.
ಕಾರ್ತಿಕ್ ನಿಶ್ಚಿತಾರ್ಥ ಸಂಬಂಧ ನನಗೆ ಯಾವುದೇ ಮಾಹಿತಿ ಇರಲಿಲ್ಲ. ನಿಶ್ಚಿತಾರ್ಥ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ನಂತರವಷ್ಟೇ ನನಗೆ ಈ ವಿಚಾರ ತಿಳಿದಿದ್ದು, ಇದರಿಂದ ನನಗೆ ಬೇಸರವಾಯಿತು ಎಂದರು.

ವೆಬ್ದುನಿಯಾವನ್ನು ಓದಿ