ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈತ್ರಿಯಾ ಗೌಡ, ನಮ್ಮ ಹಿಂದು ಸಂಪ್ರದಾಯದಂತೆ ಕಾರ್ತಿಕ್ ನನಗೆ ಹರಿಶಿನ ತಾಳಿ ಕಟ್ಟಿದ್ದು, ಆ ಮೂಲಕ ನಾನು ಅವರ ಹೆಂಡತಿಯಾಗಿದ್ದೇನೆ ಹೀಗಾಗಿ ಕಾರ್ತಿಕ್ ನನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳಲೇಬೇಕು. ಆ ಮೂಲಕ ಡಿವಿ ಸದಾನಂದಗೌಡ ಅವರು ನನ್ನನ್ನು ಸೊಸೆಯೆಂದು ಒಪ್ಪಿಕೊಳ್ಳಲಿ ಎಂದು ಕಣ್ಣಿರೀಟ್ಟರು.
ಪ್ರಕರಣ ಹಿನ್ನೆಲೆ
ಕಾರ್ತಿಕ್ ಪರಿಚಯವಾಗಿದ್ದು ಕುಶಾಲ್ ಎಂಬುವರು ಮೂಲಕ. ಆನಂತರ ಹಲವು ಬಾರಿ ನನ್ನನ್ನು ಭೇಟಿ ಮಾಡಿದ್ದರು. ಪ್ರತಿ ಸಲ ಕರೆ ಮಾಡುತ್ತಿದ್ದಾಗಲು ಕಾರ್ತಿಕ್ ನನ್ನನ್ನು ಐ ಲವ್ ಯೂ ಎಂದು ಹೇಳುತ್ತಿದ್ದರು. ಬಳಿಕ ಕಾರ್ತಿಕ್ ನನ್ನ ಜೊತೆ ದೈಹಿಕ ಸಂಪರ್ಕ ಸಾಧಿಸಲು ಒತ್ತಾಯಿಸುತ್ತಿದ್ದರು. ಆದರೆ ನಮ್ಮ ಮದುವೆ ನಂತರ ದೈಹಿಕವಾಗಿ ಸಂಪರ್ಕ ಮಾಡೋನಾ ಎಂದು ತಿಳಿಸಿದ್ದೆ. ಹೀಗಾಗಿ ಕಾರ್ತಿಕ್ ಮಂಗಳೂರಿನಲ್ಲಿರುವ ಅವರ ಮನೆಯಲ್ಲಿ ತಾಳಿ ಕಟ್ಟಿ ಮದುವೆಯಾಗಿದ್ದರು ಎಂದು ಹೇಳಿದರು.