ಕಾವೇರಿ ಪ್ರತಿಭಟನೆಯಿಂದ ತತ್ತರಿಸಿಹೋಗಿದ್ದ ಮಹಾನಗರಿ ಬೆಂಗಳೂರು ಇದೀಗ ಸಹಜ ಸ್ಥಿತಿಗೆ ಮರಳುತ್ತಿದ್ದು, ಬಸ್, ಅಟೋ ಸಂಚಾರ ಆರಂಭವಾಗಿದೆ.
ನಗರಾದ್ಯಂತ ಅಂಗಡಿ ಮುಗ್ಗಟ್ಟುಗಳು ತೆರೆಯಲಾಗಿದ್ದು, ಸಾರ್ವಜನಿಕರು ಅಗತ್ಯವಾದ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಮತ್ತೆ ಕಾವೇರಿ ಹೋರಾಟ ಆರಂಭವಾದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ತೊಂದರೆಯಾಗಬಹುದು ಎನ್ನುವ ಆತಂಕವನ್ನು ಹೊಂದಿದ್ದಾರೆ.