ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲವಾದ್ದರಿಂದ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ರಾಜ್ಯ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಪಾದಯಾತ್ರೆಯು ನಡೆದಿದೆ. ''ಎಲ್ಲರ ನಡಿಗೆ ಜಾತ್ಯತೀತ ನಿಲುವಿನೆಡೆಗೆ'' ಘೋಷಣೆಯಡಿ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೋಟೆ ಮೈದಾನದಿಂದ ಕೆಂಪಾಪುರ ಸಮಾಧಿ ಸ್ಥಳದವರೆಗೆ ಪಾದಯಾತ್ರೆ ಹೊರಟಿದ್ದಾರೆ.
ನಿರ್ಮಲಾನಂದ ನಾಥ ಸ್ವಾಮಿಗಳು, ಕುಮಾರ ಚಂದ್ರಶೇಖರ ನಾಥ ಶ್ರೀ , ನಂಜಾವಧೂತ ಸ್ವಾಮೀಜಿ ಮುಂತಾದ ಮಠಾಧೀಶರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.