ಅತ್ತ ದೊಡ್ಡೋರ ಭಾಷಣ.... ಇತ್ತ ಊಟಕ್ಕಾಗಿ ಕಿತ್ತಾಟ

ಶುಕ್ರವಾರ, 17 ಫೆಬ್ರವರಿ 2017 (16:08 IST)
ಕಾಂಗ್ರೆಸ್ ಪಕ್ಷ ಅಯೋಜಿಸಿದ ಜನವೇದನಾ ಸಮಾವೇಶದಲ್ಲಿ ಒಂದೆಡೆ ಪಕ್ಷದ ಮುಖಂಡರು ಭಾಷಣದಲ್ಲಿ ಮುಳುಗಿದ್ದರೆ, ಮತ್ತೊಂದೆಡೆ ಕಾರ್ಯಕರ್ತರು ಊಟಕ್ಕಾಗಿ ಕಿತ್ತಾಟ ನಡೆಸಿರುವುದು ನಡೆದಿದೆ.
 
ಇಂದು ನಗರದಲ್ಲಿ ಆಯೋಜಿಸಲಾಗಿದ್ದು ಜನವೇದನಾ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಇನ್ನು ಸಭೆಯಲ್ಲಿ ಭಾಷಣ ಮಾಡುತ್ತಿರುವಂತೆ ಕಾಂಗ್ರೆಸ್ ಕಾರ್ಯಕರ್ತರು ಊಟದ ಟೆಂಟ್‌ಗೆ ನುಗ್ಗಿ ಕಿತ್ತಾಟ ನಡೆಸಿದರು.
 
ಜನವೇದನಾ ಸಮಾವೇಶವನ್ನು ಆಯೋಜಕರು ವ್ಯವಸ್ಥಿತವಾಗಿ ಮಾಡಿಲ್ಲವಾದ್ದರಿಂದ ಕಾರ್ಯಕರ್ತರು ಪರದಾಡುವಂತಹ ಸ್ಥಿತಿ ಎದುರಾಗಿತ್ತು ಎಂದು ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಕೈ ಸಮಾವೇಶದಲ್ಲಿ ಹೊಯ್ ಕೈ ನಡೆದಿರುವುದು ಆಯೋಜಕರ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಲಿದ್ದಾರೆ ಎನ್ನುವುದು ಗೊತ್ತಿದ್ದರೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡದಿರುವುದು ಟೀಕೆಗೊಳಗಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ