ಬಯಲುಸೀಮೆ ಜಿಲ್ಲೆಯಲ್ಲಿ ಶನಿವಾರ ಸಂಜೆ ಭೀಕರವಾಗಿ ಸುರಿದ ಮಳೆಯ ಪರಿಣಾಮ ಬಂಗಾರಪೇಟೆ, ಮಾಲೂರು, ಕೋಲಾರ ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಹೆಚ್ಚಿನ ಬೆಳೆ ಹಾನಿ ಕಂಡು ಬಂದಿದೆ. ಅದರಲ್ಲೂ ಬಂಗಾರಪೇಟೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಟೊಮೆಟೋ, ಕ್ಯಾಪ್ಸಿಕಂ, ಪಪಾಯ ಮುಂತಾದ ಬೆಳೆಗಳು ಕೊಯ್ಲಿಗೆ ನಿಂತಿದ್ದು, ಸಾಲಸೋಲ ಮಾಡಿ ಬೆಳೆಯಲಾಗಿದ್ದ ಬೆಳೆ ಕೈಗೆ ಸಿಗುವಷ್ಟರಲ್ಲಿ ನಾಶವಾಗಿದ್ದು ಬಡರೈತರನ್ನು ಕಂಗೆಡಿಸಿದೆ.