ವಿಚಾರಣಾ ವೇಳೆ ಮಾತನಾಡಿದ ಅವರು, ಯುಪಿಎಸ್ ಸಿ ಸೇರಿದಂತೆ ರಾಷ್ಟ್ರದ ಯಾವುದೇ ರಾಜ್ಯಕ್ಕೆ ಸೇರಿದ ಲೋಕಸೇವಾ ಆಯೋಗಗಳಿಗೂ ಕೂಡ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ನೂತನ ನಿಯಮಾವಳಿಗಳನ್ನು ರೂಪಿಸಿ ಏಕರೂಪದ ಅಧ್ಯಕ್ಷರ ನೇಮಕಾತಿಯನ್ನು ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ. ಅಲ್ಲದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸದಸ್ಯರಿಲ್ಲದೆ ಇರುವುದರಿಂದ ಸಮಸ್ಯೆ ಉದ್ಭವಿಸಿದ್ದು, ಸಾವಿರಾರು ಹುದ್ದೆಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗಾಗಿ ಏಕರೂಪದ ನಿಯಮಾವಳಿಯನ್ನು ಜಾರಿಗೆ ತರುವ ಅವಶ್ಯವಿದೆ ಎಂದರು.